ನಿಜಶರಣ ಅಂಬಿಗರ ಚೌಡಯ್ಯ ವಚನ-ನಿರ್ವಚನ

Author : ಎಸ್.ಎಂ. ಹಿರೇಮಠ

Pages 274

₹ 150.00




Year of Publication: 2006
Published by: ವಿದ್ಯಾನಿಧಿ
Phone: 9886407011

Synopsys

ಡಾ,ಎಸ್ ಎಂ ಹಿರೇಮಠ ಅವರು ಬರೆದ ಅಧ್ಯಯನ ಗ್ರಂಥ ನಿಜಶರಣ ಅಂಬಿಗರ ಚೌಡಯ್ಯ ವಚನ-ನಿರ್ವಚನ. ಅಂಬಿಗರ ಚೌಡಯ್ಯ ಹನ್ನೆರಡನೆಯ ಶತಮಾನದ ಕನ್ನಡ ನಾಡಿನ ನೆಲೆಯಿಂದ ಅಲ್ಪಾವಧಿಯಲ್ಲಿಯೇ ಅವತರಿಸಿ ಬಂದ ಅಸಂಖ್ಯಾತ ಶಿವಶರಣರ ಕ್ರಾಂತಿಯು ವಿಶ್ವವನ್ನೇ ತನ್ನೆಡೆಗೆ ನೋಡುವಂತೆ ಮಾಡಿತು. ಸಂಘರ್ಷದ ಬದುಕನ್ನೇ ಆಯ್ಕೆ ಮಾಡಿಕೊಂಡಿದ್ದ ಹಲವಾರು ಶಿವಶರಣರು ಈ ಕ್ರಾಂತಿಯ ಕರ್ಣದಾರತ್ವವನ್ನು ವಹಿಸುದುದರ ಕಾರಣದಿಂದ, ಪರಾಂಪರಾಗತವಾಗಿ ಆವರೆಗೂ ನಡೆದುಕೊಂಡು ಬಂದಿದ್ದ ಸಾಮಾಜಿಕ ದಾರ್ಮಿಕ ಸಾಂಸ್ಕೃತಿಕಾದಿ ಕ್ಷೇತ್ರಗಳೆಲ್ಲ ವಿನೂತನವಾದ ಧೋರಣೆಗಳನ್ನು ತಾಳುವಂತಾಯಿತು .ಆ ಧೋರಣೆಗಳ ಅಪೂರ್ವವಾದುದರಿಂದ ಜಾಗತಿಕ ಪ್ರಾಜ್ಞಾರೆಲ್ಲ ಬೆರಗು ಕಣ್ಣಿಂದ ಬಸವಾದಿ ಶಿವಶರಣರ ಜೀವನ ಸಾದನೆಗಳೆಡೆಗೆ ನೋಡುವುದು ಅನಿವಾರ್ಯವೇ ಆಯಿತು. ನೇರ ನಡೆಯ,ದಿಟ್ಟ ನಿಲುವಿನ,ನಿಷ್ಠುರ ನುಡಿಯ,ಯಾರ ಮುಲಾಜಿಗೂ ಒಳಗಾಗದಿರುವ ಅಂಬಿಗರ ಚೌಡಯ್ಯ ನಂತಹ ಶರಣ ಶಕ್ತಿಗಳಿಂದ ಶರಣ ಕ್ರಾಂತಿಯು ಮತ್ತಷ್ಟು ಬಲವನ್ನು ಪಡೆದುಕೊಂಡಿತು.ಈ ಕುರಿತು ಅನೇಕ ಮಾಹಿತಿಗಳು ಕೃತಿಯಲ್ಲಿವೆ.

About the Author

ಎಸ್.ಎಂ. ಹಿರೇಮಠ

ಎಂ. ಎಸ್. ಹಿರೇಮಠ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರಗಿಯಲ್ಲಿ 1956 ಜುಲೈ 22 ಜನಿಸಿದರು. ತಂದೆ ಪುರಾಣರತ್ನ ಮಹಾಂತಸ್ವಾಮಿ. ತಾಯಿ ನೀಲಮ್ಮ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟಿದೂರಿನಲ್ಲೇ ಪೂರೈಸಿದ ಅವರು ಬಿ. ಎ. ಪದವಿಯನ್ನು ಕಲಬುರಗಿಯ ಶ್ರೀ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಪಡೆದರು. ಕಲಬುರಗಿಯ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ‘ಶರಣಬಸವೇಶ್ವರರು ಹಾಗೂ ಅವರ ಪರಿಸರದ ಸಾಹಿತ್ಯ’ ಇವರ ಪಿಎಚ್‌.ಡಿ ಮಹಾಪ್ರಬಂಧ. ರಂಗಭೂಮಿಯಲ್ಲೂ ಆಸಕ್ತಿ ಹೊಂದಿದ್ದ ಹಿರೇಮಠರು ಬೆಂಗಳೂರಿನ ಆದರ್ಶ ಫಿಲಂ ಚಲನಚಿತ್ರ ...

READ MORE

Related Books